ಆಷಾಢ ಮಾಸದ ಕೊನೆಯ ದಿನದಂದು ಅತಿಯಾದ ಮದ್ಯ ಸೇವನೆಯಿಂದ ಯುವಕರು ಗಟಾರಗಳಲ್ಲಿ ಬೀಳುವುದರಿಂದ ಈ ಹಬ್ಬಕ್ಕೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
ಈ ದಿನದಂದು ಜನರು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಮದ್ಯವನ್ನು ಕುಡಿಯಬಹುದು ಮತ್ತು ಇದನ್ನು ಕಾರವಾರ ಮತ್ತು ಜೊಯಿಡಾ ಭಾಗದಲ್ಲಿ ಧಾರ್ಮಿಕ ಆಚರಣೆ ಎಂದು ಪರಿಗಣಿಸಲಾಗಿದೆ.
ಕರಾವಳಿ ಭಾಗದಲ್ಲಿ ಹೆಚ್ಚಿನವರು ಮಾಂಸಾಹಾರಿಗಳಾದರೂ ಶ್ರಾವಣ ಮಾಸ ಪೂರ್ತಿ ಮಾಂಸಾಹಾರ ಸೇವಿಸುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಮತ್ತು ಕಾರವಾರದಲ್ಲಿ ಮದ್ಯದ ಪ್ರಿಯರು ಶ್ರಾವಣ ಮಾಸ (ಭಾರತೀಯ ಕ್ಯಾಲೆಂಡರ್ ಪ್ರಕಾರ) ಆಗಮನವನ್ನು ಗಟಾರಿ ಅಮವಾಸ್ಯೆ ಎಂಬ ವಿಶಿಷ್ಟ ಹಬ್ಬದೊಂದಿಗೆ ಸ್ವಾಗತಿಸುತ್ತಾರೆ.
ಬೆಳಗಾವಿ ಜಿಲ್ಲೆಯ ಸಣ್ಣ ಗ್ರಾಮಗಳನ್ನು ಹೊರತಾಗಿ, ಹಬ್ಬವು ಉತ್ತರ ಕನ್ನಡಕ್ಕೆ ಹೆಚ್ಚಾಗಿ ಸೀಮಿತವಾಗಿದೆ, ಏಕೆಂದರೆ ಈ ಪ್ರದೇಶವು ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದಾಗ ನೆರೆಯ ಮಹಾರಾಷ್ಟ್ರದಿಂದ ಸಂಪ್ರದಾಯವನ್ನು ಅಳವಡಿಸಿಕೊಂಡಿದೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಕಾರವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಬಾರ್ ಮತ್ತು ರೆಸ್ಟೋರೆಂಟ್ಗಳು ಈ ದಿನದ ಬಹು ನಿರೀಕ್ಷಿತ ಹೆಚ್ಚಿನ ಗ್ರಾಹಕರಿಗಾಗಿ ಬರದಿಂದ ವ್ಯವಸ್ಥೆ ಮಾಡುವಲ್ಲಿ ನಿರತವಾಗಿರುತ್ತವೆ.
ಕೊಂಕಣಿಯಲ್ಲಿ ಗಟಾರಿ ಅಮವಾಸ್ಯೆ ಮತ್ತು ಕನ್ನಡದಲ್ಲಿ ಗಟಾರು ಅಮವಾಸೆ ಎಂದು ಕರೆಯುವ ಈ ಆಚರಣೆಯಲ್ಲಿ ಯುವಕರು ಆಷಾಢದ ಕೊನೆಯ ದಿನದಂದು ಸಾಧ್ಯವಾದಷ್ಟು ಮದ್ಯವನ್ನು ಸೇವಿಸಿ ಮತ್ತಿನಲ್ಲಿ ತೇಲಾಡಿ, ಮೈಮರೆತು ನಂತರ ಶ್ರಾವಣದ ಶುದ್ಧ ಶಾಖಾಹಾರಿ ವ್ರತಕ್ಕೆ ಸಜ್ಜಾಗುತ್ತಾರೆ ಮತ್ತು ಶ್ರಾವಣ ಮಾಸ ಪೂರ್ತಿ ಮದ್ಯವನ್ನು ಸೇವನೆ ಮಾಡದೇ ಪವಿತ್ರ ವೃತದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.


Leave a Reply