ಮದ್ಯದ ಬಾಟಲಿಯೊಂದಿಗೆ ದೇವಾಲಯಕ್ಕೆ ತೆರಳುವುದನ್ನು ಅಥವಾ ಭಗವಂತನಿಗೆ ಸಿಗರೇಟನ್ನು ಅರ್ಪಿಸುವುದನ್ನು ಯಾರೂ ಊಹಿಸದಿರಬಹುದು, ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಒಂದು ದೇವಾಲಯದಲ್ಲಿನ ಈ ಪದ್ಧತಿ ನಿಮ್ಮ ಊಹೆಗೆ ನಿಲುಕಲಾರದ್ದಾಗಿದೆ. ಕೋಡಿಬಾಗ್ ನಲ್ಲಿರುವ ಖಾಪ್ರಿ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು ಪ್ರತಿ ವರ್ಷ ವಾರ್ಷಿಕ ಜಾತ್ರಾ ಆಚರಣೆಯ ಸಮಯದಲ್ಲಿ ವಿಚಿತ್ರ ಆಚರಣೆಯನ್ನು ಅನುಸರಿಸುತ್ತಾರೆ.
ಕ್ರೈಸ್ತರು ಸೇರಿದಂತೆ ಕಾರವಾರ, ಗೋವಾ, ಮಹಾರಾಷ್ಟ್ರಗಳಿಂದ ಸಾವಿರಾರು ಎಲ್ಲಾ ಧರ್ಮದ ಜನರು ಉತ್ಸವದಲ್ಲಿ ಭಾಗವಹಿಸುತ್ತಾರೆ. ಪ್ರತಿ ವರ್ಷವೂ ಈ ದೇವಾಲಯದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ ಹಾಗು ದೇವಾಲಯವನ್ನು ನೋಡಿಕೊಳ್ಳುವ ಪುರುಷರು, ಬಾಲಕೃಷ್ಣ ನೈಕ ಮತ್ತು ಅವರ ಸಹೋದರ ಮಂಗೇಶ್ ನೈಕ, ಈ ಆಚರಣೆಯನ್ನು ತಲೆಮಾರುಗಳಿಂದ ಆಚರಿಸಲಾಗುತ್ತಿದೆ ಎಂದು ಭಕ್ತರು ನಂಬುತ್ತಾರೆ.
ಜನರು ತಮ್ಮ ಆರೋಗ್ಯ, ವ್ಯವಹಾರ ಅಥವಾ ವೃತ್ತಿಯಲ್ಲಿ ಸಮಸ್ಯೆಯನ್ನು ಎದುರಿಸಿದಾಗಲೆಲ್ಲಾ, ಅವರು ಪ್ರತಿಜ್ಞೆ ಮಾಡುತ್ತಾರೆ ಮತ್ತು ಅವರ ಬಯಕೆಗಳು ಪೂರೈಸಿದಾಗ ಅರ್ಪಣೆಗಳನ್ನು ಸಲ್ಲಿಸುತ್ತಾರೆ. ಸಾಮಾನ್ಯವಾಗಿ ಹೂವು, ತೆಂಗಿನಕಾಯಿ, ಬಾಳೆಹಣ್ಣುಗಳನ್ನು ಸಹ ನೀಡಲಾಗುತ್ತದೆ. ಕ್ರೈಸ್ತರು ಈ ದೇವಾಲಯದಲ್ಲಿ ಮೇಣದ ಬತ್ತಿಗಳನ್ನು ಅರ್ಪಿಸುತ್ತಾರೆ.
ಕಾಪ್ರಿ ಪ್ರತಿಮೆಯ ಮೇಲೆ ಅಭಿಷೇಕವಾಗಿ ಸಾವಿರಾರು ಲೀಟರ್ ಮದ್ಯವನ್ನು ಸುರಿಯಲಾಗುತ್ತದೆ. ಬೆಳಗ್ಗೆ ತಿಲಹೋಮ, ಅಭಿಷೇಕದೊಂದಿಗೆ ಉತ್ಸವ ಆರಂಭವಾಗಿ ಸಂಜೆ ಮಂಗಳಆರತಿ ನೆರವೇರಿಸಲಾಗುತ್ತದೆ. ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಈ ಸಮಯದಲ್ಲಿ ನಡೆಯುತ್ತವೆ.
ದೇವಾಲಯಕ್ಕೆ ಸಂಬಂಧಿಸಿದ ಹಲವಾರು ಕಥೆಗಳಿವೆ. ಸುಮಾರು 300 ವರ್ಷಗಳ ಹಿಂದೆ ಆಫ್ರಿಕನ್ ಸಂತ ಆ ಪ್ರದೇಶದ ಜನರಿಗೆ ಗಿಡಮೂಲಿಕೆ ಔಷಧಿಗಳನ್ನು ನೀಡಿ ಅರೋಗ್ಯ ತೊದರೆಗಳನ್ನು ಹೋಗಲಾಡಿಸುತ್ತಿದ್ದರು, ಈ ಕೆಲಸಕ್ಕೆ ಅವರು ಧನ ಹಾಗು ಇತರೆ ವಸ್ತುಗಳನ್ನು ಅಪೇಕ್ಷಿಸುತ್ತಿರಲಿಲ್ಲ. ಅವರು ಮದ್ಯ ಹಾಗು ಸಿಗರೇಟು ಪ್ರಿಯರಾಗಿದ್ದರು. ಉಳ್ಳವರು ಪ್ರೀತಿಯಿಂದ ನೀಡುತಿದ್ದ ಮದ್ಯ, ಸಿಗರೇಟುಗಳು ಮತ್ತು ಬೀಡಿಗಳನ್ನು ಸ್ವೀಕರಿಸುತ್ತಿದ್ದರು ಎಂದು ತಿಳಿದು ಬಂದಿದೆ. ಕೆಲವು ವರ್ಷಗಳ ನಂತರ ಅವರು ಕಾಣೆಯಾದರು ಮತ್ತು ಪ್ರತಿಮೆರೂಪದಲ್ಲಿ ಪತ್ತೆಯಾದರು ಎನ್ನಲಾಗುತ್ತದೆ, ಅಂದಿನಿಂದ ಅವರಿಗೆ ದೇವಾಲಯವನ್ನು ಕಟ್ಟಿ ಪೂಜಿಸಲಾಗುತ್ತಿದೆ.

ವಿಳಾಸ: ಶ್ರೀ ಖಾಫ್ರಿದೇವ್ ಟೆಂಪಲ್, ತಾರಿವಾಡ, ಕೋಡಿಬಾಗ್, ಕಾರವಾರ.


Leave a Reply