ಹುಬ್ಬಳ್ಳಿಯಿಂದ ಶಿರಸಿಗೆ ಸಂಚರಿಸುತ್ತಿದ್ದ ಜವಾಹರ್ ನೆಹರು ಪ್ರಯಾಣ ಮಾಡುತ್ತಿದ್ದ ಕಾರು ಚಕ್ಕಡಿಗೆ ಡಿಕ್ಕಿ ಹೊಡೆದಿದೆ. ಎತ್ತು ನೊಗ ತಪ್ಪಿಸಿಕೊಂಡು ಬಚಾವಾಗಿದೆ. ತಗ್ಗಿನಲ್ಲಿ ಇಳಿದ ಗಾಡಿಯನ್ನು ಪುನಃ ರಸ್ತೆಗೆ ತರಲು ಪ್ರಯಾಸ ಪಡಬೇಕಾಯಿತು. ಈ ಸಂದರ್ಭದಲ್ಲಿ ನೆಹರು ಕಾರು ಇಳಿದು ಎತ್ತಿನ ಗಾಡಿಯ ಚಕ್ರ ನೂಕಿದರು.
ಗಾಡಿಗೆ ಪುನಃ ಎತ್ತು ಕಟ್ಟಿದ ಬಳಿಕ ನೆಹರು ಕಾರು ಪ್ರಯಾಣ ಮುಂದುವರಿಸಿತು.
‘ರಸ್ತೆ ಕೆಟ್ಟದಾಗಿದೆ. ನಿಧಾನಕ್ಕೆ ಹೋಗಿ ‘ ಎಂದು ಶಿರಸಿ ಹುಬ್ಬಳ್ಳಿ ರಸ್ತೆಯಲ್ಲಿ ಸಂಚರಿಸುವಾಗ ಚಾಲಕನಿಗೆ ನೆಹರು ಹೇಳಿದರು.
12-2-1937
ಶಿರಸಿ ವರದಿ
ಮಾಹಿತಿ: ಶಿವಾನಂದ ಕಲವೆ


Leave a Reply