ಗಿಳಿಗುಂಡಿ ಶಿರಸಿಯಲ್ಲಿನ ಕಡಿಮೆ ಪ್ರಸಿದ್ಧಿ ಪಡೆದಿರುವ ಭಕ್ತಿ ಸ್ಥಳವಾಗಿದೆ. ಇದು ಮಂಜಗುಣಿ “ಶ್ರೀ ವೆಂಕಟರಮಣ ಸ್ವಾಮಿ”ಯ ಜನ್ಮಸ್ಥಳ.
ಈ ಸ್ಥಳವು ತನ್ನ ನೈಸರ್ಗಿಕ ಸೌಂದರ್ಯ ಮತ್ತು ತಂಪಾದ ಪರಿಸರಕ್ಕೆ ಹೆಸರುವಾಸಿಯಾಗಿದೆ. ಈ ಗ್ರಾಮದಲ್ಲಿ ಒಂದು ಸಣ್ಣ ಮತ್ತು ಶುದ್ಧ ನದಿ ಹರಿಯುತ್ತದೆ.

ಈ ಸಣ್ಣ ನದಿಯ ದಡದಲ್ಲಿ ಶ್ರೀ ವೆಂಕಟ್ರಮಣ ಸ್ವಾಮಿಯ ಮೂಲ ಸ್ಥಳವಿದೆ. ಈ ಸ್ಥಳವು ತನ್ನಲ್ಲಿರುವ ಒಂದು ವಿಶಿಷ್ಟ ಗುಹೆಗೆ ಹೆಸರುವಾಸಿಯಾಗಿದೆ.

ಹೌದು ಗಿಳಿಗುಂಡಿಯ ಈ ನದಿಯ ದಡದಲ್ಲಿ ಒಂದು ಸುಂದರವಾದ ಗುಹೆ ಇದೆ, ಜನರು ಈ ಗುಹೆಯೊಳಗೆ ಸುಲಭವಾಗಿ ಹೋಗಬಹುದು. ಈ ಗುಹೆಯು 8-10 ಸದಸ್ಯರು ಒಳಗೆ ನಿಲ್ಲುವಷ್ಟು ದೊಡ್ಡದಾಗಿದೆ.

ಈ ಗುಹೆಯನ್ನು ಪ್ರವೇಶಿಸಲು ಉತ್ತಮ ಬೆಳಕಿನ ವ್ಯವಸ್ಥೆಯನ್ನು ಹೊಂದಿರಬೇಕು. ಗುಹೆಯನ್ನು ಪ್ರವೇಶಿಸಿದ ನಂತರ ಅದರೊಳಗೆ ತುಂಬಾ ತಂಪಾಗಿರುವ ಅನುಭವವಾಗುತ್ತದೆ. ಈ ಗುಹೆಯೊಳಗೆ ಇನ್ನೂ ಕೆಲವು ಗುಹೆಗಳಿವೆ, ಅದು ನಿಮ್ಮನ್ನು ಈ ಗ್ರಾಮದ ಸುತ್ತಮುತ್ತಲಿನ ಕೆಲವು ಸ್ಥಳಗಳಿಗೆ ಕರೆದೊಯ್ಯುತ್ತದೆ.

ಬಾವಲಿಗಳು ಇಲ್ಲಿ ವಾಸಿಸುತ್ತವೆ ಹಾಗೂ ಈ ಗುಹೆಯೊಳಗೆ ಕೆಲವು ಕಾಡು ಪ್ರಾಣಿಗಳು ಅಥವಾ ಹಾವುಗಳು ಕಂಡುಬರುವ ಸಾಧ್ಯತೆಗಳಿರುವುದರಿಂದ ಈ ಗುಹೆಯನ್ನು ಪ್ರವೇಶಿಸುವಾಗ ನೀವು ಎಚ್ಚರಿಕೆಯಿಂದ ಇರಬೇಕು. ಮಹಾಶಿವರಾತ್ರಿಯ 3-4 ದಿನಗಳ ಮೊದಲು ಸ್ಥಳೀಯ ಜನರು ಈ ಗುಹೆಯನ್ನು ಸ್ವಚ್ಛಗೊಳಿಸುತ್ತಾರೆ.


Leave a Reply