ಉಸಿರಿಗೆ ಉಸಿರಾದ ವನಸಿರಿ
ಜೀವರಾಶಿಗೆ ವರವಾದ ಐಸಿರಿ…
ಮನುಕುಲಕೆ ವರದಾನ ಈ ಧರಣಿ
ವೃಕ್ಷದೇವತೆ ಭೂ ಮಂಡಲದ ರಮಣಿ…
ಜೀವಜಲದ ಏಕೈಕ ತಾಣ
ಜೀವಜಗತ್ತಿಗೆ ಅದುವೇ ಪ್ರಾಣ….
ಹಸಿರಾಗಿದ್ದರೆ ಪರಿಸರ..
ಉಸಿರಾಡುವುದು ಜೀವ ಸಂಕುಲ….
ಧುಮುಕುವ ಜಲಪಾತದ ನೋಟ
ನರ್ತಿಸುವ ಸಾಗರದಲೆಗಳ ಆಟ…
ಮನೋಲ್ಲಾಸದ ಪಶ್ಚಿಮ ಘಟ್ಟ
ಕಣ್ಮನ ಸೆಳೆಯುವ ಸಾಲು ಸಾಲು ಬೆಟ್ಟ..
ಎಲ್ಲೆಲ್ಲೂ ಹಸಿರುಡುಗೆ ಉಟ್ಟ ಕಾಡು ಉತ್ತರ ಕನ್ನಡ ಸೊಬಗದು ನೋಡು..
ವೃಕ್ಷ ಮಾತೆ ತುಳಸಜ್ಜಿಯ ಕನಸು
ಪರಿಸರ ಬೆಳೆಸಿ ಮಾಡಬೇಕು ನನಸು…
ಪ್ರಕೃತಿಯ ಬೆಳೆಸೋಣ..
ಪರಿಸರ ಉಳಿಸೋಣ…
ಸುಂದರ ಪರಿಸರ ನಮ್ಮ ಆಶಯ..
ಸರ್ವರಿಗೂ ಪರಿಸರ ದಿನದ ಶುಭಾಶಯ….


Leave a Reply