ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿರುವ ಕಾನೂರ್ ಕೋಟೆಯು ಹಿಂದೆ ಈಗಿನ ಉತ್ತರ ಕನ್ನಡ ಜಿಲ್ಲಾ ಗಡಿಗೆ ಒಳಪಡುವ ಗೇರುಸೊಪ್ಪ ಮಹಾಸಂಸ್ಥಾನದ ಪ್ರಾಂತ್ಯಕ್ಕೆ ಸೇರಿತ್ತು.
ದಟ್ಟ ಕಾಡಿನ ಮಧ್ಯದಲ್ಲಿ ಹಳೆಯ ಕೋಟೆ ಹೊಂದಿರುವ ಈ ಸ್ಥಳವು ಆಕರ್ಷಣೆಯ ಕೇಂದ್ರವಾಗಿದೆ. ಇದನ್ನು ಕೆಳದಿ ಕೋಟೆ ಎಂದೂ ಕರೆಯುತ್ತಾರೆ. ಈ ಸ್ಥಳವನ್ನು ಆಳಿದ ರಾಜವಂಶದ ಹೆಸರು ಕೆಳದಿ ಆದ್ದರಿಂದ ಈ ಕೋಟೆಗೆ ಕೆಳದಿ ಕೋಟೆ ಎಂದು ಹೆಸರು ಬಂದಿರಬಹುದು.



ಗೋವರ್ಧನಗಿರಿ ಕೋಟೆ (ಕೋಟೆ ಇರುವುದು ಗೋವರ್ಧನಗಿರಿ ಬೆಟ್ಟ ಶ್ರೇಣಿಯಾಗಿರುವುದರಿಂದ) ಎಂದು ಕೂಡ ಕರೆಯಲ್ಪಡುವ ಕಾನೂರ್ ಕೋಟೆ ಶರಾವತಿ ಕಣಿವೆಯ ಹೃದಯಭಾಗದಲ್ಲಿರುವ ಒಂದು ಸೈನಿಕ ಕೋಟೆಯಾಗಿದೆ. ಕಾನೂರ್ ಗ್ರಾಮದಿಂದ ದೀರ್ಘ ಪಾದಯಾತ್ರೆಯ ನಂತರ, ಸುಮಾರು 5 ಕಿ.ಮೀ. ದೂರದಲ್ಲಿ ಹೆಬ್ಬೆಂಕೇರಿ ಕಣಿವೆಗೆ ಇಳಿದು ನಂತರ ಮುಂಡ್ವಾಲಾ ಕುಗ್ರಾಮವನ್ನು ದಾಟಿ ಕಡಿದಾದ ದಾರಿಯಲ್ಲಿ ಮೇಲೆ ಏರಿದ ನಂತರ, ಮಣ್ಣಿನ ದಾರಿ ಅಕ್ಷರಶಃ ದಟ್ಟವಾದ ಕಾಡಿನ ಮೂಲಕ ನಡೆಯುತ್ತದೆ. ಸೂರ್ಯನ ಬೆಳಕಿಗೆ ಸ್ಪರ್ಧಿಸುವ ಎತ್ತರದ ಮರಗಳು, ದೊಡ್ಡ ಭದ್ರಬೇರುಗಳನ್ನು ಹೊಂದಿರುವ ಹಳೆಯ ಮರಗಳು, ಒಬ್ಬ ವ್ಯಕ್ತಿಯು ಒಳಗೆ ಅಡಗಿಕೊಳ್ಳಲು ಹೇಳಿ ಮಾಡಿಸಿದ ಸ್ಥಳ, ಕಾಡು ಅದ್ಭುತವಾಗಿದೆ. ಇದು ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ತನ್ನ ಎಲ್ಲಾ ವೈಭವದಲ್ಲಿ ಪ್ರದರ್ಶಿಸುತ್ತದೆ. ಒಂದು ಕಡಿದಾದ ದಿಬ್ಬದ ತುದಿಗೆ ಏರುತ್ತಿದ್ದಂತೆ, ಒಂದು ಸಣ್ಣ ಸರೋವರವು ನೋಡಸಿಗುತ್ತದೆ. ಈ ಸುಂದರವಾದ ಸರೋವರವನ್ನು ದಾಟಿ ಮುಂದಕ್ಕೆ ೨೦೦ ಮೀಟರ್ ಗಳಷ್ಟು ಸಾಗಿದರೆ ನಿಮಗೆ ಕೋಟೆಯ ಬ್ರಹದಾಕಾರದ ಗೋಡೆಯು ಎದುರಾಗುತ್ತದೆ. ಅದೇ ಕಾನೂರು ಕೋಟೆ. ರಾಣಿ ಚನ್ನಭೈರಾದೇವಿ ನಿರ್ಮಿಸಿದ ಈ ಕೋಟೆಯು ಕೆಳದಿ ರಾಜರ ಆಳ್ವಿಕೆಯಲ್ಲಿ ಸುಮಾರು 16 ನೇ ಶತಮಾನದಲ್ಲಿ ವೈಭವದಿಂದ ಉತ್ತುಂಗಕ್ಕೇರಿತು. ಧೈರ್ಯಶಾಲಿಯಾಗಿದ್ದ ರಾಣಿ ಚನ್ನಭೈರಾದೇವಿಯನ್ನು ಪೆಪ್ಪರ್ ಕ್ವೀನ್ ಎಂದೂ ಕರೆಯಲಾಗುತ್ತಿತ್ತು, ಮತ್ತು ತನ್ನ ರಾಜಧಾನಿ ಗೆರ್ಸೊಪ್ಪದಿಂದ ಕಾನೂರು ಕೋಟೆಯನ್ನು ಆಳುತ್ತಿದ್ದಳು. ಕೆಲವು ಇತಿಹಾಸಕಾರರು ಅವಳು ಕೆಳದಿ ರಾಜರ ಅಡಿಯಲ್ಲಿ ಮುಖ್ಯಸ್ಥಳಂತೆ ಇದ್ದಳು ಎಂದು ನಂಬುತ್ತಾರೆ, ಇತರರು ಅವಳು ವಾಸ್ತವವಾಗಿ ಕೆಳದಿ ರಾಜರ ಭಾಗವಾಗಿದ್ದಳು ಎಂದು ಹೇಳುತ್ತಾರೆ. ಅದೇನೇ ಇದ್ದರೂ, ನಮಗೆ ತಿಳಿದಿರುವುದು ಏನೆಂದರೆ, ಅವಳು ಈ ಕೋಟೆಯನ್ನು ಅನ್ನು ನಾಡಿನ ರಕ್ಷಣೆಗಾಗಿ ಅಳುತ್ತಿದ್ದಳು ಮತ್ತು ಅಲ್ಲಿ ತನ್ನ ಸೈನಿಕರನ್ನು ಇರಿಸುತ್ತಿದ್ದಳು. ಈಗ ಕೋಟೆ ಸಂಪೂರ್ಣ ನಾಶವಾಗಿ ಕೆಲ ಅವಶೇಷಗಳು ಉಳಿದಿವೆ, ಕೋಟೆಯು ಅತಿಯಾಗಿ ಬೆಳೆದ ಉಷ್ಣವಲಯದ ಸಸ್ಯವರ್ಗದಲ್ಲಿ ಮರೆಮಾಚಿದೆ. ಇಲ್ಲಿಯ ಸುತ್ತಮುತ್ತಲಿನ ವಾತಾವರಣವು ನಿಮ್ಮನ್ನು ಇತಿಹಾಸದಲ್ಲಿ ಕಳೆದುಹೋದ ಸಮಯಕ್ಕೆ ಸಾಗಿಸುತ್ತದೆ. ಈ ಕೋಟೆ ಈಗ ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯದೊಳಗೆ ಇದೆ, ಆದ್ದರಿಂದ ಕೋಗರ್ ನಲ್ಲಿರುವ ರೇಂಜ್ ಫಾರೆಸ್ಟ್ ಆಫೀಸ್ ಅಥವಾ ಕಾರ್ಗಲ್ ನಲ್ಲಿರುವ ಎಸಿಎಫ್ ಕಚೇರಿಯಿಂದ ಈ ಪ್ರದೇಶಕ್ಕೆ ಭೇಟಿ ನೀಡಲು ಪರವಾನಗಿ ಬೇಕಾಗುತ್ತದೆ.




ಹತ್ತಿರದ ನಗರಗಳು: ಸಾಗರ, ಸಿದ್ದಾಪುರ, ಶಿರಸಿ, ಶಿವಮೊಗ್ಗ, ಹೊಸನಗರ, ಗೇರುಸೊಪ್ಪ
ಕಾನೂರು ಕೋಟೆಗೆ ಹೋಗುವ ಅಂತರ:
ಸಾಗರ:70 ಕಿ.ಮೀ | ಸಿದ್ದಾಪುರ:60 ಕಿ.ಮೀ | ಗೆರ್ಸೊಪ್ಪಾ:75 ಕಿ.ಮೀ | ಶಿರಸಿ:99ಕಿ.ಮೀ. | ಶಿವಮೊಗ್ಗ:135 ಕಿ.ಮೀ | ಹೊಸನಗರ:109 ಕಿ.ಮೀ.


Leave a Reply