ಅಕ್ಷರ ಕಲಿಕೆಯ
ತಿದ್ದಿದ ಗುರುವೇ
ಪಾದಕೆ ಶರಣು ಬಂದಿಹೆನು|
ಮಣ್ಣಿನ ಮುದ್ದೆಗೆ
ರೂಪವ ನೀಡಿದ
ತಮ್ಮನು ಮನದಿ ಭಜಿಸುವೆನು||
ಜ್ಞಾನದ ಸುಧೆಯ
ರುಚಿಯ ಹತ್ತಿಸಿ
ಸಂಸ್ಕಾರ ಸಂಸ್ಕೃತಿ ಬೆಳೆಸಿದಿರಿ|
ಸಕಲರ ಜೊತೆಯಲಿ
ಬೇಧವ ತೊರೆವ
ಐಕ್ಯದ ಸಿರಿಯ ತುಂಬಿದಿರಿ||
ಜಗವೇ ಇಂದು
ಕುಣಿದು ನಲಿದಿದೆ
ಗುರುವೇ ನಿನ್ನ ಹೆಸರಿನಲ್ಲಿ|
ನಿನ್ನ ನೆನೆಸುತ
ಲೋಕವು ಬೆಳಗಿದೆ
ಒಲುಮೆ ಗೀತೆಯ ಹಾಡುತಲಿ||
ರಚನೆ: ಸಾತು ಗೌಡ, ಬಡಗೇರಿ


Leave a Reply